ಜೆಡ್ ಪ್ಲಾಂಟ್ಸ್ ವೆಂಚರ್ ಸಂಸ್ಥೆ ಲಾಂಛನದಲ್ಲಿ ಶಿಲ್ಪಾರಮೇಶ್ರಮಣಿ ಅವರು ನಿರ್ಮಿಸಿರುವ ‘ದೇವ್ ಸನ್ ಆಫ಼್ ಮುದ್ದೇಗೌಡ’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದಿಗಂತ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಬೆಡಗಿ ಚಾರ್ಮಿ. ಅನಂತನಾಗ್, ಶರಣ್, ಸುಧಾಬೆಳವಾಡಿ, ರಾಜುತಾಳಿಕೋಟೆ, ಮತಾಲಿಯಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
ಇಂದ್ರಜಿತ್ ಲಂಕೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜೆಸ್ಸಿಗಿಫ಼್ಟ್ ಸಂಗೀತ ನೀಡಿದ್ದಾರೆ. ಸಂತೋಷ್ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಕವಿರಾಜ್ ಗೀತರಚನೆ ಹಾಗೂ ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಮತ್ತು ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.